ಡಾ. ಎಪಿಜೆ ಅಬ್ದುಲ್ ಕಲಾಂರವರು ಕೃಷಿಮೇಳಕ್ಕೆ ಭೇಟಿ ಮತ್ತು ಡಾ.ಸ್ವಾಮಿನಾಥನ್ ರವರ ಕೆವಿಕೆ ಭೇಟಿ
ಚಿಯಾ ಹಾಗೂ ಕಬ್ಬು ಬೆಳೆಯಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆ
ರೈತರ ತಾಕಿನಲ್ಲಿ ವಿಶ್ಲೇಷಣಾತ್ಮಕ ಭೇಟಿ ಹಾಗೂ ಎಎಂಸಿ ಉತ್ಪಾದನೆ ಕುರಿತು ಮಾಹಿತಿ
ರೈತರ ತಾಕಿನಲ್ಲಿ ವಿಶ್ಲೇಷಣಾತ್ಮಕ ಭೇಟಿ ಹಾಗೂ ಹಾಗೂ ನವದೆಹಲಿಯಲ್ಲಿ ಕೆವಿಕೆಯವತಿಯಿಂದ ವಸ್ತು ಪ್ರದರ್ಶನ ಆಯೋಜನೆ
ರೈತರ ತಾಕಿನಲ್ಲಿ ವಿಶ್ಲೇಷಣಾತ್ಮಕ ಭೇಟಿ
ಕೌಶಲ್ಯ ತರಬೇತಿ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆ ಚಟುವಟಿಕೆಗಳು
ಕೆವಿಕೆಯ ಫಾರಂ ಅಭಿವೃದ್ಧಿ ಹಾಗೂ ಕೆವಿಕೆಗೆ ರೈತ ಮತ್ತು ರೈತ ಮಹಿಳೆಯರ ಭೇಟಿ
ಮಣ್ಣು ಪರೀಕ್ಷೆಗೆ ಮಣ್ಣು ಆಯ್ಕೆ ವಿಧಾನ ಹಾಗೂ ಮಣ್ಣು ಆರೋಗ್ಯ ಪತ್ರ ವಿತರಣೆ

ಐಸಿಎಆರ್ ಜೆಎಸ್ಎಸ್ ಕೆವಿಕೆಗೆ ಸುಸ್ವಾಗತ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ (ಜೆಎಸ್ಎಸ್ ಕೆವಿಕೆ) ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅನುದಾನದೊಂದಿಗೆ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಯೋಜನೆಯಾಗಿದೆ. ಕೃಷಿ ವಿಜ್ಞಾನ ಕೇಂದ್ರವು ಬೇಸಾಯ ಶಾಸ್ತ್ರ, ಸಸ್ಯ ಸಂರಕ್ಷಣೆ , ತೋಟಗಾರಿಕೆ, ಬೀಜ ತಂತ್ರಜ್ಞಾನ, ಪಶು ಸಂಗೋಪನೆ, ಗೃಹ ವಿಜ್ಞಾನ ಮತ್ತು ಮಣ್ಣು ವಿಜ್ಞಾನ ಮುಂತಾದ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.



ದೃಷ್ಟಿ, ಗುರಿ & ಧ್ಯೇಯೋದ್ದೇಶ
ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯಿಂದ ಉತ್ಪನ್ನ ಹೆಚ್ಚಳ, ಲಾಭ ಮತ್ತು ಸುಸ್ಥಿರ ಕೃಷಿಯನ್ನು ಅಳವಡಿಸಿಕೊಳ್ಳುವಿಕೆ
ರೈತರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಹಾಗೂ ನಿರ್ಧಿಷ್ಟ ಕೃಷಿ ಪರಿಸರ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ಕೃಷಿ ಹಾಗೂ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳುವುದು.
ಸಾಮಾರ್ಥ್ಯಾಭಿವೃದ್ಧಿ ಅನ್ವಯಗೊಳಿಸಿ ತಂತ್ರಜ್ಞಾನ ವಿಶ್ಲೇಷಣೆ ಹಾಗೂ ಪ್ರದರ್ಶನ ಕೈಗೊಳ್ಳುವುದು
  • ಸ್ಥಳೀಯವಾಗಿ ಸೂಕ್ತವಾಗುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯಗಳ ಸುಸ್ಥಿರ ಬಳಕೆ ಹಾಗೂ ಸಂರಕ್ಷಣೆಗೆ ಒತ್ತುಕೊಡುವ ಕೃಷಿ ಭೂ ಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು
  • ಕೃಷಿ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಯೋಗ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
  • ಕೃಷಿ ಸಂಶೋಧನೆಯ ನವನವೀನ ತಂತ್ರಜ್ಞಾನಗಳ ಬಗ್ಗೆ ರೈತರು, ಯುವಕರು, ಮಹಿಳೆಯರು ಹಾಗೂ ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
  • ಅಧಿಕ ಉತ್ಪಾದನೆಗೆ ಮತ್ತು ಸ್ವ-ಉದ್ಯೋಗಕ್ಕೆ (ಕೃತಿಯಿಂದ ಕಲಿಕೆಯ ಬಗ್ಗೆ) ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಹಾಗೂ ಧೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  • ಉತ್ತಮ ಗುಣಮಟ್ಟದ ಬೀಜ, ಸಸಿಗಳು, ಜೈವಿಕ ಉತ್ಪನ್ನಗಳನ್ನು ಸಕಾಲದಲ್ಲಿ ಒದಗಿಸುವುದು.
Agri Clinic

2013 ರಲ್ಲಿ ಸ್ಥಾಪಿತವಾದ ಜೆಎಸ್ಎಸ್ ಅಗ್ರಿ ಕ್ಲಿನಿಕ್ ಮುಖ್ಯವಾಗಿ ಕೃಷಿಯಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವುದು ಮತ್ತು ಈ ಮೂಲಕ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು. ಅಗ್ರಿ ಡಾಕ್ಟರ್ ರಿಂದ ಸೂಕ್ತವಾದ ತಾಂತ್ರಿಕ ಮಾಹಿತಿಯನ್ನು ನೀಡುವುದು.
Read More >>»

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: